ಜನ ನೋಟ
ಶಿವಮೊಗ್ಗ

ಸಾಗರ : ಟಿಪ್ಪರ್‌ ಡಿಕ್ಕಿ – ಮಗಳು ಸಾವು ಬೆನ್ನಲ್ಲೇ : 8 ದಿನಗಳ ಬಳಿಕ ತಂದೆಯೂ ವಿಧಿವಶ

ಸಾಗರ: ತಾಲ್ಲೂಕಿನ ತುಮರಿ ಸಮೀಪದ ನೆಲ್ಲಿಬೀಡಿನಲ್ಲಿ ಮರಳು ತುಂಬಿದ ಟಿಪ್ಪರ್‌ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮಳೂರು ಗ್ರಾಮದ ನೀಲಕುಮಾರ್ ಜೈನ್ (45) ಚಿಕಿತ್ಸೆ ಫಲಿಸದೆ  ಮೃತಪಟ್ಟಿದ್ದಾರೆ.

ಆ.25ರಂದು ಮಗಳು ಅರ್ಚನಾ ಜೈನ್ ಅವರನ್ನು ಉಡುಪಿಗೆ ಕೆಲಸಕ್ಕೆ ಬಿಡಲು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿತ್ತು. ಟಿಪ್ಪರ್‌ ಡಿಕ್ಕಿಯ ರಭಸಕ್ಕೆ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಅರ್ಚನಾ ಸ್ಥಳದಲ್ಲೇ ಮೃತಪಟ್ಟಿದ್ದರು.

ಗಂಭೀರವಾಗಿ ಗಾಯಗೊಂಡಿದ್ದ ನೀಲಕುಮಾರ್ ಅವರನ್ನು ಮಣಿಪಾಲ ಹಾಗೂ ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮಗಳು ಹಾಗೂ ತಂದೆಯನ್ನು ಕಳೆದುಕೊಂಡ ಕುಟುಂಬಕ್ಕೆ ಘಟನೆ ಮತ್ತಷ್ಟು ಆಘಾತ ತಂದಿದೆ.

ಮೃತ ಅರ್ಚನಾ ಉಡುಪಿಯ ಖಾಸಗಿ ಹಾಸ್ಟೆಲ್‌ನಲ್ಲಿ ವಾರ್ಡನ್‌ ಆಗಿ ಕೆಲಸ ಮಾಡುತ್ತಿದ್ದರು. ಘಟನೆಗೆ ಸಂಬಂಧಿಸಿದಂತೆ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related posts

ಜಿಲ್ಲಾವಾರು ಪ್ರಗತಿಪರ ರೈತ, ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ

JanaNota Editor

ಸೆ.6ರಂದು ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

JanaNota Editor

ಮಧು ಕೆಲಸ ನೋಡಿ ಸಚಿವ ಸ್ಥಾನ‌ ಲಭಿಸಿದೆ : ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನ ಕುಮಾರ್

JanaNota Editor