ಜನ ನೋಟ
ಶಿವಮೊಗ್ಗ

ಗುತ್ತಿ ಮಲ್ನಾಡ್ ಆಸ್ಪತ್ರೆಯಲ್ಲಿ ಆ. 6ರಂದು ಆರ್ಥೋಪೆಡಿಕ್ ಸಮಾಲೋಚನಾ ಶಿಬಿರ

ಶಿವಮೊಗ್ಗ,ಆ.5: ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆ (ಬನ್ನೇರಘಟ್ಟ ರಸ್ತೆ) ಸಹಯೋಗದಲ್ಲಿ ಶಿವಮೊಗ್ಗದ ಗುತ್ತಿ ಮಲ್ನಾಡ್ ಆಸ್ಪತ್ರೆಯಲ್ಲಿ ಆಗಸ್ಟ್ 6ರಂದು ಉಚಿತ ಆರ್ಥೋಪೆಡಿಕ್ (ಮೂಳೆ ಮತ್ತು ಕೀಲು) ಸಮಾಲೋಚನಾ ಶಿಬಿರವನ್ನು ಆಯೋಜಿಸಲಾಗಿದೆ.
ನಗರದ ಕುವೆಂಪು ರಸ್ತೆ, ಜೈಲ್ ವೃತ್ತದ ಸಮೀಪ ಇರುವ ಗುತ್ತಿ ಮಲ್ನಾಡ್ ಆಸ್ಪತ್ರೆಯಲ್ಲಿ ಮಧ್ಯಾಹ್ನ 3.30ರಿಂದ ಸಂಜೆ 5 ಗಂಟೆಯವರೆಗೆ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಹೆಸರಾಂತ ಮೂಳೆ ಮತ್ತು ಕೀಲು ಬದಲಿ ಶಸ್ತ್ರಚಿಕಿತ್ಸಾ ತಜ್ಞ ಡಾ. ಮೋಹನ್ ಕೆ. ಪುತ್ತಸ್ವಾಮಿ ಭಾಗವಹಿಸಿ, ಕೀಹೋಲ್ ಮೂಳೆಚಿಕಿತ್ಸೆ ಅಗತ್ಯವಿರುವವರು, ಸೋಂಟ, ಮೊಣಕಾಲು ಹಾಗೂ ಇತರ ಕೀಲು ನೋವಿನಿಂದ ಬಳಲುತ್ತಿರುವವರು, ನಡೆಯಲು ಅಥವಾ ಚಲಿಸಲು ತೊಂದರೆ ಅನುಭವಿಸುತ್ತಿರುವವರು, ಕೀಲು ಬದಲಿ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಹಿರಿಯ ನಾಗರಿಕರು ಹಾಗೂ ಕೀಲುಗಳಲ್ಲಿ ಬಿಗಿತ, ಊತ ಅಥವಾ ಇತರ ಅಸ್ವಸ್ಥತೆ ಹೊಂದಿರುವವರಿಗೆ ವೈದ್ಯಕೀಯ ಸಲಹೆ ನೀಡಲಿದ್ದಾರೆ.
ರೊಬೊಟಿಕ್ ಶಸ್ತ್ರಚಿಕಿತ್ಸೆಯ ಮೂಲಕ ಹೆಚ್ಚಿನ ನಿಖರತೆ, ಕಡಿಮೆ ತೊಡಕುಗಳು ಮತ್ತು ಸೋಂಕಿನ ಸಾಧ್ಯತೆ, ಆಸ್ಪತ್ರೆಯಲ್ಲಿ ಕಡಿಮೆ ದಿನಗಳ ವಾಸ, ತ್ವರಿತ ಚೇತರಿಕೆ, ಕಡಿಮೆ ನೋವು ಹಾಗೂ ರಕ್ತಸ್ರಾವ ಸೇರಿದಂತೆ ಹಲವು ಪ್ರಯೋಜನಗಳ ಕುರಿತು ಕೂಡ ಮಾಹಿತಿ ನೀಡಲಾಗುತ್ತದೆ.
ಶಿಬಿರದಲ್ಲಿ ಭಾಗವಹಿಸುವ ರೋಗಿಗಳಿಗೆ ತಜ್ಞರ ಸಮಾಲೋಚನೆಯೊಂದಿಗೆ ಮುಂದಿನ ಚಿಕಿತ್ಸಾ ಆಯ್ಕೆಗಳ ಬಗ್ಗೆ ಮಾರ್ಗದರ್ಶನವೂ ನೀಡಲಾಗುತ್ತದೆ.
ಶಿಬಿರಕ್ಕೆ ಪೂರ್ವ ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 90352 09360 ಅನ್ನು ಸಂಪರ್ಕಿಸಬಹುದು.

Related posts

ಶಿವಮೊಗ್ಗದಲ್ಲಿ ಆ.29ರಿಂದ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ

JanaNota Editor

ಬೀರುವಿನ ಲಾಕರ್‌ನಲ್ಲಿದ್ದ ₹4.64 ಲಕ್ಷದ ಚಿನ್ನಾಭರಣ ನಾಪತ್ತೆ : ಸಂಬಂಧಿಕನ ಮೇಲೆಯೇ ಅನುಮಾನ!

JanaNota Editor

ಹೊಳೆಹೊನ್ನೂರು : ಹೊಸ ಮಿಷನ್ ಟ್ರಯಲ್ ವೇಳೆ ದುರಂತ: ವಿದ್ಯುತ್ ಶಾಕ್‌ಗೆ ಪೇಂಟರ್ ಸಾವು

JanaNota Editor