ಜನ ನೋಟ
ರಾಜ್ಯ

ರಾಜ್ಯದ 43.81 ಲಕ್ಷ ಮತದಾರರ ಸ್ಥಿತಿ ಅತಂತ್ರ : ಚುನಾವಣಾ ಆಯೋಗದಿಂದ ನೋಟಿಸ್

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಈಗ ಮತದಾರರ ಮನೆ ಬಾಗಿಲಿಗೆ ಆತಂಕ ತಂದಿಟ್ಟಿದೆ. ರಾಜ್ಯದಲ್ಲಿದ್ದ ಒಟ್ಟು 5.54 ಕೋಟಿ ಮತದಾರರ ಪೈಕಿ 1.8 ಕೋಟಿ ಮತದಾರರನ್ನು ಎಎಸ್‌ಡಿಡಿಒ ಅಡಿಯಲ್ಲಿ ಯಾವುದೇ ನೋಟಿಸ್‌ ಕೊಡದೆ ಡಿಲೀಟ್ ಮಾಡಿರುವ ಚುನಾವಣಾ ಆಯೋಗ ಮತದಾರರ ಸಂಖ್ಯೆಯನ್ನು 4.46 ಕೋಟಿಗೆ ಇಳಿಸಿದೆ.

ಇದೀಗ, ಈ ಮತದಾರರ ಪೈಕಿ ಬರೋಬ್ಬರಿ 43.81 ಲಕ್ಷ ಮಂದಿಯನ್ನು ಅನುಮಾನದಿಂದ ನೋಡುತ್ತಿದೆ. 43.81 ಲಕ್ಷ ಮತದಾರರಿಗೆ ನೋಟಿಸ್‌ ಕಳಿಸಲು ಆಯೋಗ ಮುಂದಾಗಿದೆ. ಶುಕ್ರವಾರದಿಂದಲೇ ನೋಟಿಸ್‌ ಕಳಿಸುವ ಪ್ರಕ್ರಿಯೆ ಆರಂಭಿಸಿರುವುದಾಗಿ ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಆಗಸ್ಟ್ 24 ರಿಂದ ಸೆಪ್ಟೆಂಬರ್ 23 ರವರೆಗೆ ಮತದಾರರ ಪಟ್ಟಿಯಲ್ಲಿನ ವಿವರಗಳನ್ನು ಸರಿಪಡಿಸಿಕೊಳ್ಳಲು ಹಾಗೀ ಆಗಸ್ಟ್ 24 ರಿಂದ ಅಕ್ಟೋಬರ್ 22 ರವರೆಗೆ ಹಕ್ಕುಗಳು ಮತ್ತು ಆಕ್ಷೇಪಣೆಗಳ ನೋಟಿಸ್ ಅವಧಿಯನ್ನು ಒಳಗೊಂಡಿರುತ್ತದೆ. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27 ರಂದು ಪ್ರಕಟಿಸಲಾಗುವುದು.

ನೋಟಿಸ್‌ಗಳನ್ನು ನಾಗರಿಕರಿಗೆ ಅವರ ಮನೆ ಬಾಗಿಲಿಗೆ ನೀಡಲು BLO ಗಳಿಗೆ ಹಸ್ತಾಂತರಿಸುತ್ತಾರೆ. ಪರಿಶೀಲನೆಗಾಗಿ ನಾಗರಿಕರು ನಿರ್ದಿಷ್ಟ ದಾಖಲೆಗಳೊಂದಿಗೆ ಸಂಬಂಧಪಟ್ಟ ಚುನಾವಣಾ ನೋಂದಣಿ ಅಧಿಕಾರಿಗಳು (ERO ಗಳು) ಮತ್ತು ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳನ್ನು (AERO ಗಳು) ಭೇಟಿ ಮಾಡಬೇಕಾಗುತ್ತದೆ. ಇದು ವಿಫಲವಾದರೆ, ಅವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬಹುದು ಮತ್ತು ಫಾರ್ಮ್-6 ಬಳಸಿ ಸೇರ್ಪಡೆಗಾಗಿ ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತದೆ.

Related posts

ಬಿಗ್‌ಬಾಸ್‌ ಕನ್ನಡ ಸೀಸನ್‌ 13ಕ್ಕೆ ಕಾನೂನು ಸಂಕಷ್ಟ : NOC ನೀಡದಂತೆ ದೂರು

JanaNota Editor

ಗುಟ್ಕಾ, ಪಾನ್‌ ಮಸಾಲ ಮೇಲಿನ ಒಂದು ವರ್ಷದ ನಿಷೇಧ: ಆದೇಶ ಹಿಂಪಡೆದ ಸಿಎಂ ಡಿ ಕೆ ಶಿವಕುಮಾರ್

JanaNota Editor

ತಂದೆಯ ಸಾವಿನ ಬಳಿಕ ಆಸ್ತಿ ಕಲಹ : ತಹಶೀಲ್ದಾರ್ ಕಚೇರಿ ಮುಂದೆ ಶವವಿಟ್ಟು ಧರಣಿ

JanaNota Editor